ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ

ಅಪ್ಪಾ ಆರಿಗೆ ಸಿಗದ ಬದುಕಿನೊಳಿಟ್ಟಾ
ಎನಗೆ ಒಪ್ಪುವಂಥಾ ಹೆಣ್ಣು ತಂದು ಮದುವಿಮಾಡಬಿಟ್ಟಾ ||ಪ||

ಆಕಿಯ ಸ್ನೇಹದಿ ಹದಿನಾಲ್ಕು ಮಕ್ಕಳ ಹಡದೆ
ಈ ಲೋಕದ ಆಚಾರವ ಬಿಟ್ಟು ಬೇಕೆನುತ ಸಂಸಾರ ಮಾರ್ಗವ ಹಿಡಿದೆ
ಮಾಯಾ ನೂಕಿ ಬ್ರಹ್ಮಗುರುಪಾದಾಂಬುಜ ಸೋಂಕಿ ಸೌಖ್ಯವ ಪಡೆದೆ ||೧||

ಓದು ಅಕ್ಷರ ವೇದ ಶಾಸ್ತ್ರದ ಸೊಲ್ಲಾ
ಸಾಧನವಿದ್ಯ ಸಕಲೈಶ್ವರ್ಯ ಸಂಪದ ಗಾದಿಮಾತುಗಳೆಲ್ಲಾ
ಪಾದದಲಿ ಮೆಟ್ಟೆಂದು ಹೇಳಿದೆನಲ್ಲಾ
ಬೋಧಿಸಿ ನಾದಬಿಂದು ಕಲಹ ತತ್ವದ ಹಾದಿ ತೋರಿಸಬಲ್ಲಾ ||೨||

ಹೆಣ್ಣು ಹೊಲ ಮನಿ ಕೆಲಸಗಳೆಂಬಾ
ಹೊನ್ನುಗಳಿಸಿ ಬಂಗಾರ ಬೆಳ್ಳಿ ಹಣಗಳನು ಎಣಿಸಿ ಮೆರೆಯುವ ಜಂಬಾ
ತನ್ನೊಳರಿಯದೆ ಅನ್ಯ ಕರ್ಮದ ಡಂಬವ ಬಿಟ್ಟು
ಚನ್ನ ಶಿಶುನಾಳಧೀಶನೋಳ್ ಪಡಿಯೆಂದಾ ಭಾಗ್ಯದ ಕುಂಭಾ ||೩||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತತ್ವಬೋಧದೊಳಗಿದ್ದು ಭವಬಾಧೆಯನು ಗೆದ್ದು
Next post ಬಹೋಧವಾದೀತೆ ಆನಂದ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys